22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಲೇಖಕರು: ಹೇಮಾ
May 19, 2013 2 159

“ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡುವಿನ ಮುಖ್ಯ ಕತೆಗಾರ. ಈ ಸಂಕಲನದ ಕತೆಗಳಲ್ಲಿ ಸಾಫ್ಟ್‍ವೇರ್‍ ಲೋಕದ ತಲ್ಲಣಗಳು, ಜಾಗತೀಕರಣದ ಪ್ರಭಾವಗಳು ಹೇಗೆ ಬದುಕನ್ನು ಆವರಿಸಿವೆ ಎಂಬುದನ್ನು ಕಟ್ಟಿಕೊಡುತ್ತಾರೆ.

ಮೊದಲ ಕತೆ ‘ಚೇಳು’ ವೆಂಕಮ್ಮ ಎಂಬ ಹೆಣ್ಣೊಬ್ಬಳ ಬದುಕಿನ ಪಲ್ಲಟಗಳನ್ನು, ಪಾರಂಪರಿಕ ಜ್ಞಾನಗಳು ಜಾಗತೀಕರಣದ ಭರಾಟೆಯಲ್ಲಿ ಮೂಲೆಗುಂಪಾಗುವುದನ್ನು ಹೇಳುತ್ತವೆ. ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಅವಳ ಗಂಡ ಕೋಮಣ್ಣ ಹೇಳಿದ, ಮಾಡಿಸಿದ ವ್ರತ,ಪೂಜೆಗಳನ್ನೆಲ್ಲ ಮಾಡಿದರೂ ಪ್ರಯೋಜನವಾಗುವುದಿಲ್ಲ. ಕಡೆಗೆ ತನ್ನೂರಿಗೆ ಬಂದ ಭೈರಾಗಿಯೊಬ್ಬನನ್ನು ಕೋಮಣ್ಣ ತನ್ನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳುತ್ತಾನೆ. ಮೊದಲಿಗೆ ನಿರಾಕರಿಸಿದ ಭೈರಾಗಿ ನಂತರ ಕೋಮಣ್ಣನ ಬಲವಂತಕ್ಕೆ ಮಣಿಯುತ್ತಾನೆ. ಮೂರು ದಿನಗಳ ಪೂಜೆಗೆ ವೆಂಕಮ್ಮನನ್ನು ರಾತ್ರಿ ಒಬ್ಬಳನ್ನೇ ಕಳಿಸಲು ಹೇಳುತ್ತಾನೆ. ಮೊದಲ ರಾತ್ರಿಯ ನಂತರವೇ ವೆಂಕಮ್ಮ ಮತ್ತೆ ಹೋಗಲು ನಿರಾಕರಿಸಿದರೂ ಕೋಮಣ್ಣ ಬಲವಂತದಿಂದ ಕಳಿಸಿಕೊಡುತ್ತಾನೆ. ನಂತರ ಅನುಮಾನ ಬಂದು ಅವಳನ್ನು ಹಿಂಬಾಲಿಸಿದಾಗ ನಡೆಯುತ್ತಿರುವ ಸಂಗತಿ ಬಯಲಾಗುತ್ತದೆ. ಹೆಂಡತಿಯನ್ನು ತಪ್ಪಿತಸ್ಥಳನ್ನಾಗಿ ಮಾಡಿ ಅವಳ ಸಂಬಂಧ ಕಡಿದುಕೊಳ್ಳುತ್ತಾನೆ. ಮಗಳ ವಿಷಯ ತಿಳಿದ ತಂದೆತಾಯಿಗಳು ಊರಿಂದ ಬಂದು ಅವಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತಾಯಿ ಮಗಳ ವರ್ತನೆಗೆ ರೋಸಿ ಹೀಗೇಕೆ ಮಾಡಿದೆ ಎಂದು ಕೇಳಿದಾಗ ವೆಂಕಮ್ಮ ‘ಹೇಗಾದರೂ ಮಕ್ಕಳಾಗಲಿ ಅನ್ನಿಸಿತು’ ಎಂದು ತಣ್ಣಗೆ ಉತ್ತರಿಸುತ್ತಾಳೆ. ಅಲ್ಲಿಂದ ಅವಳ ಬದುಕಿನಲ್ಲಿ ಬಂಧು-ಭಾಂದವರೆಲ್ಲ ದೂರವಾಗಿ ಒಂಟಿಯಾಗುತ್ತಾಳೆ. ಭೈರಾಗಿ ಹೇಳಿಕೊಟ್ಟ ಚೇಳಿನ ವಿಷವಿಳಿಸುವ ವೈದ್ಯ ಅವಳ ಬದುಕಿಗೆ ಆಧಾರವಾಗುತ್ತದೆ. ಆದರೆ ಚೇಳಿನ ಸಂತತಿಯನ್ನೇ ನಾಶ ಮಾಡಬಲ್ಲ ಔಷಧ ಬಂದು ವೆಂಕಮ್ಮ ಇಳಿವಯಸ್ಸಿನಲ್ಲಿ ಮತ್ತೆ ನಿರಾಶ್ರಿತಳಾಗುತ್ತಾಳೆ. ಊರಿಗೆ ಹೊಸಬರು ಬಂದಾಗ ‘ನಿಮ್ಮೂರಲ್ಲಿ ಚೇಳಿದ್ದರೆ ನನ್ನ ಕರೆದುಕೊಂಡು ಹೋಗಿ ವಿಷವಿಳಿಸುತ್ತೇನೆ’ ಎಂದು ಕೇಳಿಕೊಳ್ಳುವ ಸ್ಥಿತಿಗೆ ಬಂದು ನಿಲ್ಲುತ್ತಾಳೆ. ತನ್ನ ವೈದ್ಯದಿಂದ ಊರ ಜನರ ಪ್ರಾಣ ಕಾಪಾಡುವ ಸಂದರ್ಭದಲ್ಲಿ ಗೌರವದಿಂದ ನಡೆಸಿಕೊಳ್ಳುತ್ತಿದ್ದ ಮಂದಿ ಚೇಳನ್ನು ಕೊಲ್ಲುವ ಔಷಧ ಸಿಕ್ಕ ತಕ್ಷಣ ಆಕೆಯನ್ನು ತುಚ್ಛವಾಗಿ ಕಾಣಲಾರಂಭಿಸುತ್ತಾರೆ. ವೆಂಕಮ್ಮನಿಗೆ ತನ್ನ ಕೊನೆಗಾಲ ಬಂತೆಂದು ಅನ್ನಿಸಲಾರಂಭಿಸುತ್ತದೆ. ತನಗೆ ತಿಳಿದ ವಿದ್ಯೆ ತನ್ನೊಂದಿಗೆ ನಾಶವಾಗಬಾರದೆಂದು ಯಾರಿಗಾದರೂ ಹೇಳಿಕೊಡೋಣವೆಂದು ಅಂದುಕೊಂಡರು ಅವಳಿಂದ ವಿದ್ಯೆ ಕಲಿಯಲು ಯಾರೂ ಸಿಗದೆ ಆಕೆ ಅದೇ ಚೇಳಿನ ಔಷಧ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ವಿಧ: ಪುಸ್ತಕ ವಿಮರ್ಶೆ

ಸಂಪದದಲ್ಲಿ ನೀವೂ ಬರೆಯಬಹುದು...

ಸಂಪದದಲ್ಲಿ ನೀವೂ ಬರೆಯಬಹುದು. ನಿಮ್ಮ ಬರಹಗಳನ್ನು ಸ್ವತಃ ನೀವೇ ಪ್ರಕಟಿಸಬಹುದು. ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನುಡಿಮುತ್ತು

ಋಣದ ಮೂಟೆಯ ಹೊರಿಸಿ,ಪೂರ್ವಾಜೀತದ ಹುರಿಯ
ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು
ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ
ಕುಣಿವ ಗರ್ದಭ ನೀನು - ಮಂಕುತಿಮ್ಮ         

ಮಂಕುತಿಮ್ಮ ಕಗ್ಗ
ಡಿ ವಿ ಜಿ

ಪುಸ್ತಕ ಪರಿಚಯ

ಮೊಬೈಲಿನಲ್ಲಿ ಸಾರಂಗ, ಸಂಪದ